ತೆಂಗಿನೊಂಬಾಳೇಲಿ
ಗಡಿಗೆಗಂಟಿದ ಜೇನ
ಮಂಡಿಪೇಟೇಲಿ ಕದ್ದು ಮಾರಿದ್ದು
ಜಟ್ಕಾಗಾಡೀಲಿ ತುಮ್ಕೂರು
ತಿರುಗಿದ್ದು

ಮುಂಜಾನೆದ್ದು
ಕಲ್ಲುಸಕ್ಕರೆ ಬೆರೆಸಿ
ಗಟಗಟಾ ಕುಡಿದಿದ್ದು

ಸರಾಯಿ ಪಾಪಯ್ಯ ಶಾನೆ
ಲಾಸಾಗಿ ಕಂಪ್ಲೇಂಟು ಗೀಚಿದ್ದು
ಗಾಂಧಿ ಹೆಸರಲ್ಲಿ
ಜನದನ ರಸ್ತೆಗಿಳಿದು
ಘೀಳಿಟ್ಟಿದ್ದು

ಪೋಲೀಸಪ್ಪನ ಬುಲೆಟ್ಟು  ಗುರಿತಪ್ಪಿ
ಗೋಡೆಗಳ ಹೊಕ್ಕಿದ್ದು

ಬಳ್ಳಾರಿ ಜೈಲಲ್ಲಿಟ್ಟ ಹೂಗಳು
ಬಾಡದೆ ಹಿಂತಿರುಗಿದ್ದು

ಹೆಂಟೆ ಮಣ್ಣಿನ ತುಂಬ
ಉದ್ದ ಟೋಪಿಯ ಸಂತ
ಸದಾ ಜೀವಂತ