You are currently browsing the monthly archive for October 2008.
ದಖನ್ ದೇಶದಲ್ಲಿ ಬಹಳ ಹಿಂದೆ ನಡೆದ ಕಥೆ. ದರೋಡೆಕೋರನೊಬ್ಬನಿಗೆ ಹಾದಿಹೋಕರನ್ನು ದೋಚುವುದೇ ಕೆಲಸ. ತಮ್ಮಲ್ಲಿದ್ದ ಎಲ್ಲವನ್ನೂ ಅವರು ಕೊಡಬೇಕಿತ್ತು ಇಲ್ಲವೇ ಹೆಣವಾಗಬೇಕಿತ್ತು. ಒಮ್ಮೊಮ್ಮೆ ಇವರ ತಂಡ ಇಡೀ ಹಳ್ಳಿಯನ್ನೇ ದೋಚುತ್ತಿತ್ತು.
ಅಂಥ ಒಂದು ಹಳ್ಳಿಯಲ್ಲಿ ಒಬ್ಬಳು. ದರೋಡೆಕೋರ ಅವಳನ್ನು ಹೊತ್ತೊಯ್ದ. ತಣಿಯುವಷ್ಟು ಪ್ರೇಮಿಸಿದ. ಒಂದು ದಿನ ಅದೆಂಥದೋ ದೊಡ್ಡ ಕಾಯಿಲೆ ಬಡಿದು ಅವಳು ಸತ್ತುಹೋದಳು. ಅವನಿಗೆ ಹುಚ್ಚು ಹಿಡಿಯುವುದೊಂದು ಬಾಕಿ. ತಾನು ಬಚ್ಚಿಟ್ಟದ್ದನ್ನೆಲ್ಲ ದಾನ ಮಾಡಿದ. ಸುಮ್ಮನೆ ಉದ್ದಕ್ಕೆ ನಡೆಯುತ್ತ ಹೋದ. ಹಲವು ದರೋಡೆಗಳನ್ನು ತಡೆದ. ಕಂಡವರಿಗೆ ಗಂಜಿ ಬೇಯಿಸಿ ಕೊಟ್ಟ.
ಹಾದಿಯಲ್ಲಿ ನಡೆಯುತ್ತಿದ್ದವನು ಇದ್ದಕ್ಕಿದಂತೆ ಜನರ ಎದೆಯೊಳಗೆ ನಡೆಯತೊಡಗಿದ. ಶತಮಾನಗಳನ್ನು ದಾಟಿದ.





ಹೀಗೆಂದರು…