You are currently browsing the monthly archive for August 2009.
‘ಸ್ವಾಮಿ ಇದೊಂದು ತಿಳಿ ನೀರಿನ ಬುಗ್ಗೆ ಎನ್ನುತ್ತೀರಿ ನೀವು’
‘ಹೌದು’
‘ಆದರೆ ನೀರೆಲ್ಲ ಬಗ್ಗಡ?’
‘ಸರಿಯಾಗಿ ನೋಡು ಅದು ತಿಳಿನೀರು’
‘ಇಲ್ಲ ಬಗ್ಗಡ’
‘ಇಲ್ಲ ತಿಳಿ’
ಚರ್ಚೆ ಗಂಟೆಗಳವರೆಗೆ ನಡೆಯಿತು. ಜನ ಸೇರಿದರು. ನೀರು ಕದಡಿದೆ ಎಂದೇ ವಾದಿಸಿದರು.
ಗುರು ಮಾತ್ರ ಹಠ ಬಿಡದೆ ‘ಈಗ ನೋಡಿ’ ಎಂದರು. ನೀರು ತಿಳಿಯಾಗತೊಡಗಿತ್ತು.

ಕಣ್ಣು ಗುರಿಯನ್ನೇ ನೋಡುತ್ತಿತ್ತು. ಬಾಣ ಹೆದೆ ಏರಿತ್ತು. ಎದುರಿಗೇ ಹೆಬ್ಬುಲಿಯೊಂದು ನೀರು ಕುಡಿಯುತ್ತಿತ್ತು. ಅದರ ಬಲಿಷ್ಟ ದೇಹ, ಕಪ್ಪು ಹಳದಿಯ ಪಟ್ಟೆಗಳು… ಅದೆಷ್ಟೋ ದಿನಗಳಿಂದ ಕಾಯುತ್ತಿದ್ದ ಭರ್ಜರಿ ಬೇಟೆ ಇದು. ಅದು ಕಣ್ಣು ಮುಚ್ಚಿ ಬಿಟ್ಟಾಗ ಇವನ ಕಣ್ಣು ಹೊಳೆಯುತ್ತಿತ್ತು. ಇನ್ನು ಹೆಚ್ಚು ತಡ ಮಾಡುವಂತಿಲ್ಲ. ವಯಸ್ಸಿನ ಹುಲಿ. ಇದ್ದಕ್ಕಿದ್ದಂತೆ ಅದರ ಉಗುರು ಹಲ್ಲು ಇವನ ಗಮನ ಸೆಳೆಯಿತು. ತನ್ನ ಮುಂದಿದ್ದ ಬಾಣವನ್ನು ಈಗ ಆತ ನೋಡಿದ. ಹುಲಿಯ ಉಗುರಿಗಿಂತ ಅವನ ಬಾಣ ಚೂಪೆನಿಸಿತು.
ಮತ್ತೆಂದೂ ಆತ ಬೇಟೆಯಾಡಲಿಲ್ಲ ಎಂಬುದು ಊರಲ್ಲಿ ಸುದ್ದಿ.


ಹೀಗೆಂದರು…