‘ಸ್ವಾಮಿ ಇದೊಂದು ತಿಳಿ ನೀರಿನ ಬುಗ್ಗೆ ಎನ್ನುತ್ತೀರಿ ನೀವು’
‘ಹೌದು’
‘ಆದರೆ ನೀರೆಲ್ಲ ಬಗ್ಗಡ?’
‘ಸರಿಯಾಗಿ ನೋಡು ಅದು ತಿಳಿನೀರು’
‘ಇಲ್ಲ ಬಗ್ಗಡ’
‘ಇಲ್ಲ ತಿಳಿ’
ಚರ್ಚೆ ಗಂಟೆಗಳವರೆಗೆ ನಡೆಯಿತು. ಜನ ಸೇರಿದರು. ನೀರು ಕದಡಿದೆ ಎಂದೇ ವಾದಿಸಿದರು.
ಗುರು ಮಾತ್ರ ಹಠ ಬಿಡದೆ ‘ಈಗ ನೋಡಿ’ ಎಂದರು. ನೀರು ತಿಳಿಯಾಗತೊಡಗಿತ್ತು.


No comments yet
Comments feed for this article