ಕನ್ನಡದ ಪ್ರಮುಖ ಪತ್ರಿಕೆಯೊಂದರ ಸಂಪಾದಕರು ಲಂಕೇಶರ ಸಂದರ್ಶನ ಪಡೆಯಲು ಹೋದರು. ಲಂಕೇಶರ ಸಿಟ್ಟು ಸೆಡವು ಅರಿತಿದ್ದ ಆ ಯುವ ಸಂಪಾದಕರಿಗೆ ಅವರನ್ನು ಮಾತನಾಡಿಸಲು ಹಿಂಜರಿಕೆ. ಲಂಕೇಶ್ ಆಗಲೇ ಹಣ್ಣಾಗಿದ್ದರು. ಅವರ ಒಂದು ಕಣ್ಣು ಕಾಣದಾಗಿತ್ತು. ಅವರ ಹುಳಿಮಾವಿನ ಮರ ಬಗ್ಗೆ ಇವರು ಬರೆದು ಇವರು ಬರೆದದ್ದರ ಮೇಲೆ ಅವರು ಬರೆದು ಎಲ್ಲವೂ ಮುಗಿದಿತ್ತು. ಅಂದು ಸಂದರ್ಶನ ಪಡೆಯಲು ಹೋದವರಿಗೆ ಲಂಕೇಶ್ ಶಾಕ್ ಕೊಟ್ಟಿದ್ದರು. ಅವರ ಕಣ್ಣಲ್ಲಿ ನೀರಿತ್ತು. ಸಾವು ಅವರನ್ನು ಕಾಡುತ್ತಿತ್ತು ಅನ್ನಿಸುತ್ತದೆ. ‘I will die like a cacroach I say’ ಅಂದರು. ಆದರೆ ಅವರು ಸತ್ತದ್ದೇ ಬೇರೆ ರೀತಿ. ಲಂಕೇಶರ ಮಿತ್ರರೊಬ್ಬರು ಹೇಳಿಕೊಂಡಂತೆ ಪರ್ವತದ ರೀತಿ.