published in Vijayavani

ಕೇರಳದ ಮುರಳಿ ಚೀರೊತ್ ಹಳ್ಳಿಗಾಡಿನ ಬಣ್ಣದ ಹುಡುಗ. ಕೇರಳ, ಪಶ್ಚಿಮ ಬಂಗಾಳ ಸುತ್ತಿಬಂದು ಈಗ ಬೆಂಗಳೂರನ್ನು ತಮ್ಮ ಕ್ಯಾನ್ವಾಸ್ ಮೂಲಕ ಧ್ಯಾನಿಸುತ್ತಿದ್ದಾರೆ. ಕಲಾವಿದನೊಬ್ಬ ನಗರವನ್ನು ನೋಡುವ ಪರಿ ಬೇರೆ.
ಬಂಗಾರದ ಮೈಗಳೇ ಹರಿದಾಡುವ ರ್ಯಾಂಪ್ ಮೇಲೆ ಕಪ್ಪು ಆಕೃತಿಯೊಂದು ‘ನಾನೇನೂ ಕಡಿಮೆಯಲ್ಲ’ ಎಂಬಂತೆ ಹೆಜ್ಜೆಯಿರಿಸುತ್ತ ಬರುತ್ತದೆ. ಓಹ್ ಕಪ್ಪು ರೂಪದರ್ಶಿ ಎಂದು ಮೂಗುಮುರಿಯುವ ಉದ್ಘಾರ ಹೊರಡುತ್ತದೆ. ಗುಂಗುರು ಕೂದಲು, ತೀಕ್ಷ್ಣ ಕಣ್ಣುಗಳು, ದಪ್ಪ ತುಟಿ, ನೀಳ ದೇಹ ಎಂದುಕೊಳ್ಳುವ ಹೊತ್ತಿಗೇ ಆ ಆಕೃತಿ ಮರೆಯಾಗುತ್ತದೆ. ಆದರೆ ನಿಜಕ್ಕೂ ಮರೆಯಾಗುತ್ತದೆಯೇ?

ಕನ್ನಡ ಚಿತ್ರರಂಗ ಸೇರಿದಂತೆ ಭಾರತೀಯ ಸಿನಿಮಾ ಕುಸಿಯುತ್ತಿದ್ದರೆ ನಟರು ನಿರ್ದೇಶಕರತ್ತ ನಿರ್ದೇಶಕರು ನಿರ್ಮಾಪಕರತ್ತ, ನಿರ್ಮಾಪಕರು ಪ್ರೇಕ್ಷಕರತ್ತ ಬೊಟ್ಟು ಮಾಡಿ ಕೈ ತೊಳೆದುಕೊಳ್ಳುತ್ತ್ತಾರೆ. ಸಿನಿಮಾ ಎಂಬುದು ಒಂದು ತಪಸ್ಸಿನಂತಾಗದೆ ಕೈಗಾರಿಕೆಯಂತೆ ಯಾಂತ್ರಿಕವಾಗಿರುವುದು ಅದರ ಪ್ರಮುಖ ವೈಫಲ್ಯತೆ. ಈ ಕೈಗಾರಿಕೆಯ ಉತ್ಪನ್ನವೇ ಆಗಿರುವ ಬಹುತೇಕ ಹಿರಿಕಿರಿಯ ನಟರು ಕೂಡ ಯಾಂತ್ರಿಕವಾಗಿಯೇ ಯೋಚಿಸುತ್ತಾರೆ ಅನ್ನಿಸುತ್ತದೆ.
ಒಬ್ಬ ನಟ ನಾಯಕನ ಪಟ್ಟಕ್ಕೇರಿದ ಕೂಡಲೇ ಆತನೊಳಗೆ ಭ್ರಮೆಯೊಂದು ಬೇರೂರುತ್ತದೆ. ತಾನೊಬ್ಬ ನಾಯಕ ನಟ ಆ ಪಟ್ಟ ಎಂದೆಂದಿಗೂ ತ್ಯಜಿಸಬಾರದು ಎಂದು. ಹೀರೋ ಎಂಬ ಪದವನ್ನು ಚಿತ್ರರಂಗ ಅದು ಹೇಗೆ ಅರ್ಥ ಮಾಡಿಕೊಂಡಿದೆಯೋ ಗೊತ್ತಿಲ್ಲ. ಒಬ್ಬ ನಟ ಹೀರೋ ಆಗಿಬಿಟ್ಟನೆಂದರೆ ಆತ ಹಣ್ಣು ಹಣ್ಣು ಮುದುಕನಾದರೂ ಫೈಟ್ ಮಾಡುತ್ತಾ, ನಾಯಕಿಯರೊಂದಿಗೆ ಮರ ಸುತ್ತುತ್ತಲೇ ಇರಬೇಕೆಂಬ ರೂಢಿ ಚಿತ್ರೋದ್ಯಮದಕ್ಕೆ ಮೊದಲಿನಿಂದಲೂ ಅಂಟಿಕೊಂಡು ಬಂದಿರುವ ಶಾಪ. ನಾಯಕನಟರಿಗೂ ಅಷ್ಟೆ ಸಿನಿಮಾದಲ್ಲಿ ಹೀರೋ ಆಗಿ ನಟಿಸಿ ಬಿಡುವ ಚಪಲ. ವಯಸ್ಸಾದ ಕಾರಣಕ್ಕೆ ಹಿರಿಯರೂ ಆಗಿ ಹೋಗಿರುವ ನಟರನ್ನು ಎದುರುಹಾಕಿಕೊಳ್ಳುವ ಗೋಜಿಗೂ ಹೊಸ ಪೀಳಿಗೆ ಹೋಗುವುದಿಲ್ಲ. ಚಿತ್ರರಂಗ ಏನಾದರೂ ಯಶಸ್ಸಿನ ಹಾದಿಯಲ್ಲಿ ತಪ್ಪು ಹೆಜ್ಜೆಗಳನ್ನಿಡುತ್ತಿದ್ದರೆ ಅದಕ್ಕೆ ಬಹು ಮುಖ್ಯ ಕಾರಣ ಈ ನಾಯಕ ಭ್ರಮೆಯ ನಟರು.
ಇಷ್ಟೆಲ್ಲ ಹೇಳಲು ಪ್ರೇರೇಪಿಸುವಂತೆ ಮಾಡಿರುವುದು ಬಿಡುಗಡೆಗೆ ಸಜ್ಜಾಗಿರುವ ಬಾಲಿವುಡ್ ಚಿತ್ರ ’ಪಾ’. ಚಿತ್ರದಲ್ಲಿ ಅಮಿತಾಭ್ ರೋಗಗ್ರಸ್ತ ಮಗುವಿನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಟನೊಬ್ಬ ಭ್ರಮೆಗಳನ್ನು ಮರೆತಾಗ ಮಾತ್ರ ಇಂಥ ಮಹಾನ್ ಸಾಧನೆ ಸಾಧ್ಯ. ಅದನ್ನು ಮರೆತಿದ್ದಕ್ಕೇ ಚಾರ್ಲಿ ಚಾಪ್ಲಿನ್ ಜನರ ಮನಸ್ಸಿನಲ್ಲಿ ಅಚ್ಚ ಹಸುರಾಗಿ ಉಳಿದಿದ್ದು. ಒಂದು ಘಟ್ಟದವರೆಗೆ ಇಮೇಜ್ ಅನ್ನುವುದು ಮುಖ್ಯ. ಆಮೇಲೇನಿದ್ದರೂ ಇಮೇಜ್ಗಳನ್ನು ರೂಪಿಸಬೇಕು ಎಂಬುದು ನಾಯಕ ನಟರಿಗೆ ಅದೇಕೆ ಅರ್ಥವಾಗುವುದಿಲ್ಲ?
ಪ್ರಕಾಶ್ ರೈರಂಥ ಮಹಾನಟ ಇಮೇಜ್ಗೆ ಅಂಟಿ ಕುಳಿತಿದ್ದರೆ ಕಾಂಚಿವರಂನಂಥ ಶ್ರೇಷ್ಟ ಕಲಾಕೃತಿಯೊಂದು ಮೂಡಿ ಬರಲು ಸಾಧ್ಯವಿತ್ತೇ? ಹಾಗೆ ನೋಡಿದರೆ ಪ್ರಕಾಶ್ ರೈ ತಮ್ಮ ಪಾತ್ರಗಳ ಮೂಲಕ ಚಿತ್ರರಂಗದ ಗ್ರಾಮರ್ಗೆ ಪ್ರಶ್ನೆಗಳನ್ನು ಎಸೆಯುತ್ತಾರೆ. ಈ ಮೂಲಕ ಜನಮನದಲ್ಲಿ ಹಸಿರಾಗಿ ಉಳಿಯುತ್ತಾರೆ. ತೆಲುಗಿನಲ್ಲಿ ‘ಕೊತ್ತ ಬಂಗಾರು ಲೋಕಂ’ ಎಂಬ ಚಿತ್ರ ಬಿಡುಗಡೆಯಾಯಿತು. ನವಿರಾದ ಪ್ರೇಮದ ಸುತ್ತ ಚಿತ್ರ ಹೆಣೆದಿದ್ದರೂ ಥಿಯೇಟರ್ನಿಂದ ಹೊರಬಂದಾಗ ಮನಸ್ಸಿನಲ್ಲಿ ಅಚ್ಚೊತ್ತುವುದು ಪೋಷಕ ನಟನಾಗಿದ್ದ ಪ್ರಕಾಶ್ ರೈ ಪಾತ್ರ. ಅದು ನಟನೊಬ್ಬನ ನಿಜವಾದ ಯಶಸ್ಸು.
ಒಂದು ಹಂತಕ್ಕೆ ಬಂದಾಗ ನಾಯಕ ನಟರು ಕಲಿಕೆಯನ್ನು ಮರೆತು ಬಿಡುತ್ತಾರೆ ಅನ್ನಿಸುತ್ತದೆ. ಇಂದಿನ ಪ್ರೇಕ್ಷಕರು ಏನನ್ನು ಬಯಸುತ್ತಾರೆ ಎಂಬುದು ಅವರಿಗೆ ಅರ್ಥವೇ ಆಗುವುದಿಲ್ಲ. ಮುಖ್ಯಮಂತ್ರಿ ಅಭ್ಯರ್ಥಿ ತನ್ನ ಸ್ವಕ್ಷೇತ್ರದಲ್ಲಿ ಠೇವಣಿ ಕಳೆದುಕೊಳ್ಳುತ್ತಾನಲ್ಲಾ ಅಂಥ ಸ್ಥಿತಿ ಈ ವರ್ಗದ ನಟರದ್ದು.
ಉದಯೋನ್ಮುಖ ಪೋಷಕ ನಟರೊಬ್ಬರು ಚಿತ್ರವೊಂದರಲ್ಲಿ ನಟಿಸಿದ್ದರು. ಅವರನ್ನು ಭೇಟಿಯಾದ ಕಾಲೇಜು ಹುಡುಗನೊಬ್ಬ ನೀವು ನಟಿಸುತ್ತಿರುವ ಚಿತ್ರದಲ್ಲಿ ಹೀರೋ ಯಾರು ಎಂದು ಕೇಳಿದ.
ಆ ನಟ ‘ಮೂರು ಮಂದಿ’ ಎಂದು ಉತ್ತರಿಸಿದರು. ಹುಡುಗ ತಕ್ಷಣ ತನ್ನ ಮನಸ್ಸನಲ್ಲಿ ಮಾಹಾನುಭಾವ ನಟರನ್ನೆಲ್ಲ ಕಲ್ಪಿಸಿಕೊಂಡು ‘ಯಾರು ಯಾರು ಅವರು?’ ಎಂದ.
ಆ ಕಥೆಯಲ್ಲಿದ್ದ ಅಜ್ಜಿ ಮತ್ತು ಮುದುಕಿ ಹಾಗೂ ಅವರ ಮನೆಯ ಕೆಲಸಗಾರನ ಚಿತ್ರಣವನ್ನು ಕಣ್ಣ ಮುಂದೆ ತಂದರು. ಹೀರೋಯಿಸಂ ಬಗ್ಗೆ ಹುಡುಗನಲ್ಲಿದ್ದ ಕಲ್ಪನೆಗಳು ಬದಲಾದವು.
ಎಷ್ಟು ದಿನ ಒಬ್ಬನೇ ನಟನನ್ನು ನಾಯಕನನ್ನಾಗಿ ತೋರಿಸಲು ಸಾಧ್ಯ? ಆ ನಾಯಕ ನಟ ಎಷ್ಟು ದಿನ ತಾನೇ ಯುವಕನಾಗಿ ಉಳಿಯಲು ಸಾಧ್ಯ? ಇದರಿಂದ ಹಿರಿಯ ನಟರೆನಸಿಕೊಂಡವರು ಹೊಸಬರಿಗೆ ಬೋಧಿಸುವುದಾದರೂ ಏನನ್ನು?
ಭ್ರಮೆಗಳಲ್ಲಿ ಬದುಕುತ್ತಿರುವ ನಾಯಕ ನಟರೇ ಮೊದಲು ‘ಪಾ’ ಚಿತ್ರ ನೋಡಿ.
‘ಸ್ವಾಮಿ ಇದೊಂದು ತಿಳಿ ನೀರಿನ ಬುಗ್ಗೆ ಎನ್ನುತ್ತೀರಿ ನೀವು’
‘ಹೌದು’
‘ಆದರೆ ನೀರೆಲ್ಲ ಬಗ್ಗಡ?’
‘ಸರಿಯಾಗಿ ನೋಡು ಅದು ತಿಳಿನೀರು’
‘ಇಲ್ಲ ಬಗ್ಗಡ’
‘ಇಲ್ಲ ತಿಳಿ’
ಚರ್ಚೆ ಗಂಟೆಗಳವರೆಗೆ ನಡೆಯಿತು. ಜನ ಸೇರಿದರು. ನೀರು ಕದಡಿದೆ ಎಂದೇ ವಾದಿಸಿದರು.
ಗುರು ಮಾತ್ರ ಹಠ ಬಿಡದೆ ‘ಈಗ ನೋಡಿ’ ಎಂದರು. ನೀರು ತಿಳಿಯಾಗತೊಡಗಿತ್ತು.
ಕಣ್ಣು ಗುರಿಯನ್ನೇ ನೋಡುತ್ತಿತ್ತು. ಬಾಣ ಹೆದೆ ಏರಿತ್ತು. ಎದುರಿಗೇ ಹೆಬ್ಬುಲಿಯೊಂದು ನೀರು ಕುಡಿಯುತ್ತಿತ್ತು. ಅದರ ಬಲಿಷ್ಟ ದೇಹ, ಕಪ್ಪು ಹಳದಿಯ ಪಟ್ಟೆಗಳು… ಅದೆಷ್ಟೋ ದಿನಗಳಿಂದ ಕಾಯುತ್ತಿದ್ದ ಭರ್ಜರಿ ಬೇಟೆ ಇದು. ಅದು ಕಣ್ಣು ಮುಚ್ಚಿ ಬಿಟ್ಟಾಗ ಇವನ ಕಣ್ಣು ಹೊಳೆಯುತ್ತಿತ್ತು. ಇನ್ನು ಹೆಚ್ಚು ತಡ ಮಾಡುವಂತಿಲ್ಲ. ವಯಸ್ಸಿನ ಹುಲಿ. ಇದ್ದಕ್ಕಿದ್ದಂತೆ ಅದರ ಉಗುರು ಹಲ್ಲು ಇವನ ಗಮನ ಸೆಳೆಯಿತು. ತನ್ನ ಮುಂದಿದ್ದ ಬಾಣವನ್ನು ಈಗ ಆತ ನೋಡಿದ. ಹುಲಿಯ ಉಗುರಿಗಿಂತ ಅವನ ಬಾಣ ಚೂಪೆನಿಸಿತು.
ಮತ್ತೆಂದೂ ಆತ ಬೇಟೆಯಾಡಲಿಲ್ಲ ಎಂಬುದು ಊರಲ್ಲಿ ಸುದ್ದಿ.
ಅವನು ಇಳಿಯುತ್ತಲೇ ಹೋದ.
ಆಳ ಮೆಟ್ಟಿಲು. ಬೇರು. ಹಕ್ಕಿಯಿಲ್ಲದ ಗೂಡು.
ಅವನು ಇಳಿಯುತ್ತಲೇ ಹೋದ.
ಮಣ್ಣು. ಚೀರುವ ಬಾವಲಿ, ಮಂದ ಬೆಳಕು.
ಅವನು ಇಳಿಯುತ್ತಲೇ ಹೋದ.
ಇಲಿ ನುಂಗುತ್ತಿರುವ ಸರ್ಪ. ಹಸಿರು ಪಾಚಿ
ಅವನು ಇಳಿಯುತ್ತಲೆ ಹೋದ
ಅರೆ ಆಕಾಶ. ಕದಡಿದ.

ಹೀಗೆಂದರು…